July 23, 2012

ಸುಳ್ಳರ ಸಂತೆ!


ಸುಳ್ಳರ ಸಂತೆ! 

ಮೂವರು ಸುಳ್ಳರು ಒಂದು ಕಡೆ ಕೂತು ಗುಂಡು ಹಾಕುತ್ತಿದ್ದರು.  ಸ್ವಲ್ಪ ನಿಶೆ ಏರುತ್ತಿದ್ದಂತೆ ಒಬ್ಬ ಹೇಳಿದ " ನಾನು ಮಿಲಿಟರಿಯಲ್ಲಿದ್ದಾಗ  ನನ್ನನ್ನು ಕಾಡಿನ ಮಧ್ಯೆ ಇರುವ ಕ್ಯಾಂಪ್ಗೆ  ಹಾಕಿದ್ದರು.  ಅಲ್ಲಿ ಒಮ್ಮೆ ಒಂದು ಹುಲಿ ನನ್ನನ್ನು ನೋಡಿ ಅಟ್ಟಿಸಿಕೊಂಡು ಬಂತು.  ನಾನು ಹೆದರುತ್ತಿನಾ?  ಜೇಬಿಂದ ಪಿಸ್ತೂಲು ತೆಗೆದು ಒಂದೇ ಏಟಿಗೆ ಉಡಾಯಿಸಿಬಿಟ್ಟೆ. "  ಎಂದು ಕೊಚ್ಚಿಕೊಂಡ.

ಎರಡನೆಯವನು ತಾನೇನು ಕಮ್ಮಿ ಎಂದು " ಏನಾಶ್ಚರ್ಯ!  ನಂಗೂ ಇದೆ ರೀತಿ ಒಮ್ಮೆ ಆಯಿತು.  ಆದರೆ ನಾನು ಹುಲಿಯನ್ನು ಎದುರಿಸಿದ್ದೆ ಬೇರೆ ರೀತಿ."  

"ಅಂದರೆ'" ಎಂದು ಇನ್ನಿಬ್ಬರು ಒಮ್ಮೆಲೇ ಕೇಳಿದರು. 

" ಜೇಬಿಗೆ ಕೈ ಹಾಕ್ತೀನಿ, ಪಿಸ್ತೂಲು ಇಲ್ಲ. ಅದನ್ನು ಮರೆತು ಟೆಂಟ್ ನಲ್ಲೆ ಬಿಟ್ಟು ಬಂದಿದ್ದೆ.   ಹುಲಿ ಹತಿರ ಬರ್ತಾ ಇದೆ.  ತಕ್ಷಣ ನಾನು ಸೊಂಟಕ್ಕೆ ಕಟ್ಟಿದ್ದ ಬೆಲ್ಟ್ ಬಿಚ್ಚಿಕೊಂಡು ಕೊಟ್ಟೆ.....ಕೊಟ್ಟೆ.....ಕೊಟ್ಟೀ....ಹುಲಿ ಬಿದ್ದೆನೋ ಕೆಟ್ಟನೋ ಅಂತ ಓಡಿಹೋಯಿತು ಮಾರಾಯ! " 

ಮೂರನೆಯನು  "ಏನಂತ ಹೇಳಲಿ?  ನನಗೂ ಹೀಗೆ ಆಗಬೇಕಾ? "

 "ಏನು?  ನಿಂದು ಇದೆ ಕಥೇನಾ? " ಎಂದು ಇನ್ನಿಬ್ಬರು ಒಟ್ಟಿಗೆ ಕಿರುಚಿದರು.

" ತಾಳ್ಮೆ, ಯಾಕೆ ಹಾಗೆ ಕಿರುಚುತ್ತಿರಾ?  ಸ್ವಲ್ಪ ಕೇಳಿ.   ನನ್ನ ಎದುರು ಹುಲಿ ಬಂದು ನಿಂತಿದೆ. ಜೇಬಿಗೆ ಕೈ ಹಾಕಿದರೆ ಪಿಸ್ತೂಲು ಇಲ್ಲ.  ಸೊಂಟಕ್ಕೆ ಕೈ ಹಾದರೆ ಬೆಲ್ಟ್ ಕೂಡ ಇಲ್ಲ " 

" ಮತ್ತೇನು ಮಾಡಿದೆ ಮಾರಾಯ? " ಎಂದು ಆತುರದಲ್ಲಿ ಕೇಳಿದ ಒಬ್ಬ.

" ಮತ್ತೇನು ಮಾಡೋದು?  ಹಿಪ್ ಪಾಕೆಟ್ಟಿಗೆ ಕೈ ಹಾಕಿ ಅಲ್ಲಿಂದ ರೈಫೆಲ್  ಲೈಸೆನ್ಸ್ ತೋರಿಸಿದೆ ಮಾರಾಯ , ಆ ಹುಲಿ ಸತ್ತೆನೋ, ಕೆಟ್ಟೆನೋ ಎಂದು ಪರಾರಿ .   ಈಗಲೂ ನನಗೆ ಆಶ್ಚರ್ಯ ಆ ಹುಲಿ ಎಲ್ಲಿಗೆ ಹೋಯ್ತು ಅಂತ." ಎಂದು ಮತ್ತೊಂದು  ಪೆಗ್ ಏರಿಸಿದ. 

5 comments:

  1. This comment has been removed by the author.

    ReplyDelete
  2. ಹುಲಿಯೇನೋ ಓಡಿಹೋಗಿ ‘ಊರು’ಸೇರಿ ಬದುಕಿಕೊಂಡಿತು!
    ನಶೆ ಇಳಿದ ಮೇಲೆ, ಕಾಡಲ್ಲುಳಿದಿರೋ ನಮ್ಮನ್ನ ಕಾಪಾಡೋರು ಯಾರು!
    ಅಯ್ಯೋ! ಗುಂಡೂ ಇಲ್ಲವೇ!!

    ರಜನೀಶ

    ReplyDelete
    Replies
    1. ದೇವರೇ ಕಾಪಾಡಬೇಕು.
      prakaash

      Delete
  3. ಓಡಿದಿ)ಸಿ ಕೊಂಡು ಹೋಗುವ ಕಂತೆ...

    ReplyDelete
    Replies
    1. ಓಡಿ ಓಡಿ ಸುಸ್ತಾಗಿರಬೇಕು, ಹುಲಿ ಸಿಕ್ಕ ಮೇಲೆ ಮಿಕ್ಕ ಪಂಚಾಯತಿ.

      Delete