October 9, 2012

ದೊಡ್ಡವರ ದಾರಿ..........4





                 ತಾ ರಾ ಸು ಕನ್ನಡದ ಹೆಸರಾಂತ ಬರಹಗಾರರಲ್ಲಿ ಒಬ್ಬರು.  ಇವರು ತಮ್ಮ ಯೌವನದಲ್ಲಿ ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಿದ್ದರಂತೆ.  ಇವರ ಸ್ನೇಹಿತರ ಬಳಗ ದೊಡ್ಡದು. ಇವರ ಅನೇಕ ಸ್ನೇಹಿತರು ಸ್ವತಂತ್ರ ಭಾರತದ ಸರಕಾರದಲ್ಲಿ ಮಂತ್ರಿ ಮಹೋದಯರಾಗಿದ್ದರು.  ತಾ ರಾ ಸು ಬರಹಗಾರರಾಗಿಯೇ ಉಳಿದರು. ಎಂದಿನಂತೆ ಜನಪ್ರಿಯತೆ ಬಂತೆ ಹೊರತು ಇವರ ಬದುಕು ಕಷ್ಟದಲ್ಲಿಯೇ ಇತ್ತು.  ಹಲವಾರು ಪುಸ್ತಕಗಳನ್ನು ಹೊರತಂದರೂ, ಇವರ ಹಣಕಾಸಿನ ಸ್ತಿತಿ ಅಷ್ಟೇನೂ ಸುಧಾರಿಸಲಿಲ್ಲ.  ಆದರೆ, ಇದಾವುದರ ಪರಿವೆಯೂ ಈ ಕವಿಮಾನ್ಯರಿಗೆ  ಇರಲಿಲ್ಲ. 
                 ಒಮ್ಮೆ ತಾ ರಾ ಸು ರವರು ಒಂದು ಸಭೆಗೆ ಆಹ್ವಾನಿತರಾಗಿ ಹೋಗಿದ್ದರು.  ಅಲ್ಲಿಗೆ ಇವರ ಮಿತ್ರರಲ್ಲೊಬ್ಬರಾದ ಮಂತ್ರಿ ಮಹೋದಯರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.  ಕಾರ್ಯಕ್ರಮ ಮುಗಿದ ನಂತರ ಲೋಕಾಭಿರಾಮವಾಗಿ ಮಾತನಾಡುತ್ತ ಸಂಸಾರದ ವಿಚಾರ, ಆರ್ಥಿಕ ಸ್ಥಿತಿ ಗತಿ, ಇತ್ಯಾದಿಗಳು ಬಂದವು.  ಸೂಕ್ಷ್ಮವಾಗಿ ಇವರ ಪರಿಸ್ಥಿತಿ ಗಮನಿಸಿದ ಮಂತ್ರಿ ಮಹೋದಯರು ತಾ ರಾ ಸು ರವರಿಗೆ " ಸ್ವಾಮೀ, ನೀವು ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಿದ ಬಗ್ಗೆ ಒಂದು ಪ್ರಮಾಣಪತ್ರ ಲಗತ್ತಿಸಿ ಒಂದು ಅರ್ಜಿಕೊಡಿ.  ನಿಮಗೆ ಮಂಡ್ಯ ಹತ್ತಿರ ಒಂದೆರಡು ಎಕರೆ ದರಖಾಸ್ತು ಜಮೀನನ್ನು ಉಚಿತವಾಗಿ ಕೊಡಲು ಶಿಫಾರಸ್ಸು ಮಾಡುತ್ತೇನೆ. ನಿಮಗೆ ಖಂಡಿತ ಸಿಗುತ್ತದೆ " ಎಂದು ಹೇಳಿದರು.  ಆಗಲಿ ಎಂದು ಹೇಳಿ ತಾ ರಾ ಸು ಮನೆಗೆ ಬಂದರು.
                 ಒಂದೆರಡು ದಿನ ಕಳೆದ ನಂತರ ಅರ್ಜಿಯನ್ನು ತಯಾರು ಮಾಡಿದರು.  ಈ ಅರ್ಜಿಯನ್ನು ತಾ ರಾ ಸು ರವರ  ಪತ್ನಿ ಅಂಬುಜಮ್ಮ ನವರು ನೋಡಿದರು.  ಈ ಅರ್ಜಿ ಕೊಡೊ ವಿಚಾರ ಈಕೆಗೆ ಏಕೋ ಹಿಡಿಸಲಿಲ್ಲ. ಅವರು ನೇರ ಬಂದು ತಮ್ಮ ಪತಿಯಲ್ಲಿ " ನೀವು ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿದ್ದು ದೇಶಕ್ಕಾಗೋ ಅಥವಾ ಜಮೀನಿಗಾಗೋ? " ಎಂದು ಪ್ರಶ್ನಿಸಿಯೇ ಬಿಟ್ಟರು.      ಈ ಅನಿರೀಕ್ಷಿತ ಪ್ರಶ್ನೆಯಿಂದ ಕ್ಷಣಕಾಲ ತಬ್ಬಿಬ್ಬಾದರೂ ಸಾವರಿಸಿಕೊಂಡು " ದೇಶಕಾಗಿಯೇ " ಎನ್ನುತ್ತಾ   ಆ ಅರ್ಜಿಯನ್ನು ಹರಿದು ಬಿಸಾಕಿದರು.
                 ಇಂತಹ ನಿಸ್ಪೃಹ  ದಂಪತಿಗಳು  ನಮಗೆ ಆದರ್ಶವಲ್ಲವೇ?


3 comments:

  1. Sundaravaagide...deshakkoskara naavu..ennuva maatannu bittuva prasanga idu...
    ee namagaagi desha antha badidaaduva mangagale jaasti..olleya lekhana chikkappa..

    ReplyDelete
    Replies
    1. ಆತ್ಮೀಯ ಶ್ರೀಕಾಂತ,
      ನಿನ್ನ ಬರಹ ಕಂಗ್ಲಿಷ್ ಆಗಿದೆಯಲ್ಲ!!!!!!!!! ನಿನ್ನ ಅಭಿಪ್ರಾಯಕ್ಕೆ ಧನ್ಯವಾದಗಳು.

      Delete