November 1, 2012

ಬೀ Chi ಯವರ ಅಂದನಾ ತಿಮ್ಮ...........5



           
               ಬತ್ತಲೆ ಬಂದರು ಬತ್ತಲೆ ಹೋದರು|
               ಬತ್ತಲೆ ಇರುವಾಗ ಎಲ್ಲರೂ ಒಂದೇ ||
               ಸುತ್ತ ಜಗ ಬೇಸತ್ತ ಜನ ಇವರ್ಗೆಲ್ಲೇ |
               ತ್ತೆತ್ತ ಏನಿದೆ ಹೇಳೋ ತಿಂಮ ||

ಶವ ಕಂಡ ಗೌತಮ ಬುದ್ಧನಾದ, ಕೇ |
ಶವಾಚಾರಿ ಹೆಣ ಹೊತ್ತೇ ಜಗಜಟ್ಟಿಯಾದ ||
ಅವನ ಕಸುಬೇ ಅದು, ಅದರಿಂದಲೇ ಅನ್ನ |
ಅವರವರ ಕರ್ಮಕ್ಕೆ ಅವರುಂಟು ತಿಂಮ ||

               ಕಾಯಕವೇ ಕೈಲಾಸ ಎಂದಂದ ಬಸವಣ್ಣ |
               ಬಾಯಿ ಮಾತಾಗಿಹುದು ಭಾಷಣಕಷ್ಟೇ ಚಂದ ||
               ಕಾಯ ಸಮಕಳೆ ಮಾಡಿ ಬಾಳುವರು ಬಹು ಕಡಿಮೆ |
               ಮೈಯ ಜಂಗು ಹಿಡಿಸಿ ಸತ್ತವರೇ ಹೆಚ್ಚೋ ತಿಂಮ ||

ನಿನ್ನಂತೆ ನೀನಾಗು ನಿನ್ನ ನೀ ಅರಿ ಮೊದಲು |
ಚೆನ್ನೆಂದು ದೊಡ್ಡವರ ಅನುಕರಿಸಬೇಡ ||
ಏನಾಯ್ತು ಮರಿಕತ್ತೆ ?  ಚೆಲುವಿತ್ತು ಮುದ್ದಿತ್ತು |
ತನ್ನಪ್ಪ ನಂತಾಗಿ ಹಾಳಾಯ್ತು ತಿಂಮ ||

                                                                              ( ಮತ್ತಷ್ಟು ಮುಂದಿನ ದಿನಕ್ಕೆ )

No comments:

Post a Comment